Posts

Scientist's Purse

ವಿಜ್ಞಾನಿಯ ಪರ್ಸ್  ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ ( Scientist's Purse -  English version is given below in the end ) ಮೊದಲ ಸಂಬಳದ ಮಧುರ ಕ್ಷಣಗಳ ನೆನಪು ಯಾರಿಗೆ ಇಷ್ಟವಾಗುವುದಿಲ್ಲ ? ಸದಾ ತಂದೆಯನ್ನು ಕೇಳಿ ಪಡೆದು ಖರ್ಚು ಮಾಡುತ್ತ ಬಂದವನಿಗೆ ಸ್ವತಃ  ದುಡಿದು ಸಂಬಳ ಬಂದಾಗ ಸಹಜವಾಗಿಯೇ ಸ್ವಲ್ಪ ಕೋಡು ಮೂಡಿದಂತೆನಿಸಿತ್ತು.     ಆದರೆ ಅದಕ್ಕಾಗಿ ನಾನು ನನ್ನ ಹುಟ್ಟೂರಿನಿಂದ   ಮೂರು ಸಾವಿರ ಕಿಲೋಮೀಟರು ದೂರ ವಲಸೆ ಬರಬೇಕಾಯಿತು , ಡೆಹ್ರಾಡೂನ್-ನ  ಸಂಶೋಧನಾಲಯವೊಂದಕ್ಕೆ. ಭಾರತದ   ರಾಷ್ಟ್ರಪತಿಗಳು ಸಂತೋಷದಿಂದ   ನನ್ನನ್ನು ' ವಿಜ್ಞಾನಿ ' ಎಂಬ ಹುದ್ದೆಗೆ ನೇಮಿಸಿದ್ದಾರೆ   ಎಂಬ ಪತ್ರ   ತಲುಪಿದ ಮೇಲೆ - ದೂರ ಮೂರು ಸಾವಿರವಾದರೇನು ? ಆರು ಸಾವಿರವಾದರೇನು ? ಗಂಟುಮೂಟೆ ಕಟ್ಟಿ ಹೊರಡುವುದೇ  - ಎಂದು ಹೊರಟು   ಬಂದಿದ್ದೆ.   ಡೆಹ್ರಾಡೂನ್ ಹಿಮಾಲಯದ ಶ್ರೇಣಿಗಳಿಗೆ ಸಮೀಪದ ಶಿವಾಲಿಕ್ ಬೆಟ್ಟಗಳ ಸಾಲಿನ ನಡುವೆ ಇರುವ ಕಣಿವೆ ಪ್ರದೇಶ. ಅಲ್ಲಿ ತಲೆ ಎತ್ತಿ ನೋಡಿದರೆ ಉತ್ತರಕ್ಕೆ ಹರಡಿರುವ ಬೆಟ್ಟದ ಸಾಲಿನಲ್ಲಿ ಮಸ್ಸೂರಿ ಎಂಬ ಪ್ರವಾಸೀತಾಣ   ಗೋಚರಿಸುತ್ತದೆ. ಅಲ್ಲಿ ಹೋಗಿ ನೋಡಿದರೆ ಮತ್ತೂ   ಉತ್ತರಕ್ಕೆ   ಮನಮೋಹಕ ಹಿಮಾಲಯ ಶ್ರೇಣಿ ದ್ರಗ್ಗೋಚರವಾಗುತ್ತದೆ.   ಅಲ್ಲಿಯವರೆ...

When the muddy water clears

ಕದಡಿದ ಸಲಿಲಂ ತಿಳಿವಂದದಿ  ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ ( When the muddy water clears -  English version is given below in the end ) ತಣ್ಣಗಿನ ಮಾಗಿಯು  ನಿಧಾನಕ್ಕೆ ಕಳಚುತ್ತ ವಸಂತ ಆಗಮಿಸುವ ದಿನಗಳಲ್ಲಿ, ಸುತ್ತುಮುತ್ತಣದ  ತರುಲತೆಗಳೆಲ್ಲ  ಚಿಗುರಿ ಸಂಭ್ರಮಿಸುತ್ತಿದ್ದ ಒಂದು ಅಪರಾಹ್ನ, ತಿಳಿಯಾದ ಸರೋವರದ ಮೇಲಿಂದ ಸುಳಿದಾಡುತ್ತ ಮಂದವಾಗಿ ಬೀಸುವ ತಂಗಾಳಿ ಹಿತವಾಗಿ  ನನ್ನನ್ನಾವರಿಸುತ್ತಿರಲು,ನಿದ್ರಾದೇವಿಯು ನನ್ನ ಚಿತ್ತವನ್ನಪಹರಿಸತೊಡಗಿದಳು. ಕಿವಿಯ ಮೇಲೆ ಬೀಳುತ್ತಿದ್ದ, ಉಡುಪ ಮೇಷ್ಟ್ರು ಬೋಧಿಸುತ್ತಿದ್ದ  ‘ಪಾಯಿಸೊನ್ ಡಿಸ್ಟ್ರಿಬ್ಯುಶನ್’ ಪಾಠ ಮನಸ್ಸಿನ ಒಳಗೆ ನಾಟಲು ವಿಫಲವಾಗುತ್ತಿತ್ತು. ಆಗ  ಎಡಭಾಗದ ಸಾಲಿನಲ್ಲಿ ಕುಳಿತ ನಾಗವೇಣಿಯು ( ನಾವು ಹೃಸ್ವವಾಗಿ   ಕರೆಯುವ ನಾಗ್)   ಮುಡಿದ  ಕೆಂಡಸಂಪಿಗೆಯನ್ನು ಸ್ಪರ್ಶಿಸಿ ಸುಳಿದು ಬಂದ ಮಂದಮಾರುತನು ನನ್ನ ನಾಸಿಕವನ್ನು ಹೊಕ್ಕಾಗ ಮತ್ತು ಆ ಕ್ಷಣದಲ್ಲೇ ಪಕ್ಕದಲ್ಲಿ ಕೂತಿದ್ದ ರಾಧಾ ನನ್ನ  ಪಕ್ಕೆಗೆ ತಿವಿದಾಗ ನಿದ್ರಾದೇವಿಯ ಮಡಿಲಿನಿಂದ ದೊಪ್ಪನೆ ಜಾರಿ ಬಿದ್ದಂತೆನಿಸಿ  ತಡವರಿಸುತ್ತಾ ಕಣ್ಣು ತೆರೆದೆ.  ಪಿಸುಮಾತಿನಲ್ಲಿ ಗೆಳೆಯ ರಾಧಾಕೃಷ್ಣ (ನಾವು ಹೃಸ್ವವಾಗಿ   ಕರೆಯುವ ರಾಧಾ) - 'ಮೇಷ್ಟ್ರು ನಿನ್ನ ತೂಕಡಿಕೆಯನ್ನು ಗಮನಿಸಿದರು' ...

Here is a Hiriya

ಹೀಗೊಬ್ಬ ಹಿರಿಯ ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ ( Here is a Hiriya -  English version is given below in the end ) ನಾನೀಗ ಹೇಳಹೊರಟಿರುವುದು ನಮ್ಮೂರಿನ ಹಿರಿಯನ ಬಗ್ಗೆ. ಹೌದು ಅವನ ಹೆಸರೇ ಹಿರಿಯ. ಆತ ದೊಡ್ಡ ಮನುಷ್ಯನೇ, ಕಾಯದಲ್ಲಿಯೂ, ವಯಸ್ಸಿನಲ್ಲಿಯೂ, ಗುಣದಲ್ಲಿಯೂ. ಜಾತಿಯಲ್ಲಿ ಮಾತ್ರ ದೊಡ್ಡವನಲ್ಲ. ಆತ ಹೊಲೆಯರ ಜಾತಿಗೆ ಸೇರಿದವನು. ನಾನು ಚಿಕ್ಕವನಿದ್ದಾಗ ಅಮ್ಮನೊಡನೆ ಈ ಹಿರಿಯನಿಗೆ ವಯಸ್ಸೆಷ್ಟು ಎಂದು ಕೇಳಿದಾಗ ಆಕೆ ಅಂದಿದ್ದಳು - ಗೊತ್ತಿಲ್ಲಪ್ಪ, ನಾನು ಚಿಕ್ಕವಳಿದ್ದಾಗಲೂ ಆತ ಹೀಗೇ ಇದ್ದ. ಈತ ಎಲ್ಲೋ 'ಸಂಜೀವಿನಿ' ಸೇವಿಸಿರಬೇಕು ಅಂದುಕೊಳ್ಳುತ್ತಿದ್ದೆ ! ನನ್ನ ಕಾಲಕ್ಕೆ ಈ 'ಒಕ್ಕಲುತನ ಅಥವಾ ಜೀತ' ಎನ್ನುವುದು ಕಡಿಮೆಯಾಗುತ್ತ ಬಂದಿತ್ತು. ಈ ಭೂಸುಧಾರಣೆ ಕಾಯಿದೆ ಬಂದ ಮೇಲೆ ಒಕ್ಕಲು ಅನ್ನಿಸಿಕೊಂಡವರಿಗೆಲ್ಲ ಒಂದಿಷ್ಟು ಭೂಮಿಯ ಒಡೆತನ ಸಿಕ್ಕಿ ಅವರೆಲ್ಲ ಯಾರೋ ಒಬ್ಬ ಧಣಿಯ ಅಡಿಯಾಳಾಗಿ ಜೀವಮಾನ ಸವೆಸಬೇಕಾಗಿರಲಿಲ್ಲ. ಆದರೆ ಹೊಲೆಯರಿಗೆ ಮಾತ್ರ ಭೂಮಿಯ ಭಾಗ್ಯ ದಕ್ಕಿದ್ದು ಕಡಿಮೆ. ಯಾಕೆಂದರೆ ಅವರಿಗೆ ಉಳುವ ಭೂಮಿಯನ್ನು ಗೇಣಿಗೆ ಕೊಡುತ್ತಿರಲಿಲ್ಲ. ಗೇಣಿಗೆ ಕೊಂಡವರಿಗೆ ಮಾತ್ರ ಭೂಮಿ ಒಡೆತನ ದಕ್ಕುತ್ತಿತ್ತು. ಈ ಹಿರಿಯ ಸರಕಾರಿ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ಸಂಸಾರ ನಡೆಸುತ್ತಿದ್ದ. ಇನ್ನೊಬ್ಬರ ಹೊಲಗಳಲ್ಲಿ ದುಡಿಯುತ್ತಿದ್ದ. ನಮ್ಮ ಮನೆಗೂ ಕೆಲಸಕ್ಕೆ ಬರುತ್ತಿ...