Posts

Showing posts from January, 2019

Ajji Killer

    ಅಜ್ಜಿ ಯ  ಕೊಂದ  ಕಥೆ  ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ (Ajji Killer -  English version is given below in the end) ಅಜ್ಜಿ ಎಂಬ ಪದ ಅಮ್ಮ ಎಂಬ ಪದದಷ್ಟೇ ಆಪ್ಯಾಯಮಾನ ವಾದದ್ದು ಮಕ್ಕಳಿಗೆ. ಕೆಲವು ಮಕ್ಕಳಿಗೆ, ಅದರಲ್ಲೂ ಅವರ ತಾಯಿ ಕೆಲಸಕ್ಕೆ ಹೋಗುವ ತಾಯಿಯಾಗಿದ್ದರೆ, ಅಜ್ಜಿ ತಾಯಿಗಿಂತಲೂ ಒಂದು ತೊಲ  ಹೆಚ್ಛೇ ತೂಗುತ್ತಾಳೆ. ನನಗೂ ಕೂಡ ಹಾಗೆ - ನನ್ನ ಅಜ್ಜಿ ಹೆಚ್ಛೇ ತೂಗುತ್ತಿದ್ದಳು. ಅಮ್ಮನನ್ನು ಬೇಡಿ ಪಡೆಯಲಾಗದದ್ದನ್ನು ಅಜ್ಜಿಯಿಂದ ಪಡೆಯುವುದು ಎಲ್ಲ ಮಕ್ಕಳೂ  ಮೊದಲು ಕಲಿಯುವ ಜಾಣ್ಮೆ. ಅಜ್ಜಿಯಂದಿರು ಯಾವತ್ತಾದರೂ ಮಕ್ಕಳನ್ನು ಶಿಕ್ಸಿಸುವುದುಂಟೇ ? ಯಾವಾಗಲೂ ಮುದ್ದು ಮಾಡುತ್ತಿರುತ್ತಾರೆ. ಅತ್ತು ಕಾಡಿದರೆ ಕೈಯಲ್ಲಿ  ಬೆಲ್ಲದ ಚೂರೋ, ತೆಂಗಿನಕಾಯಿಯ ಹೋಳೋ, ಹುರಿಗಡಲೆಯೋ ಬೆಣ್ಣೆಯೋ  ಇಡುತ್ತಿದ್ದಳು. ತಿಂದು ಬಂದು ಮತ್ತೆ ಕೈಚಾಚಿದರೆ ಕಾಡಿದರೆ ಮತ್ತೊಂದಿಷ್ಟು. ಬಗೆದಷ್ಟೂ  ಕೊಡುವ ಕಾಮಧೇನು.   ಎಲ್ಲೋ ಹಬ್ಬಕ್ಕೆ ಹೋದರೆ ಮುಂಡಕ್ಕಿ ಖಾರಕಡ್ಡಿ ಜಿಲೇಬಿ ಸೆರಗಿನಲ್ಲಿ ಕಟ್ಟಿಕೊಂಡು ಬಂದು ತಂದುಕೊಡುವುದು, ಪೀಪೀ, ಗಿರಗಿಂಟಿ , ಬಲೂನು, ಚೆಂಡು  ಇತ್ಯಾದಿ ತಂದುಕೊಡುವುದು, ಹೀಗೆ ಮನೆಯಿಂದ ಹೊರಗೆ ಹೋಗಿ ಬಂದರೂ ಅಜ್ಜಿ ನಮ್ಮ ಸಂಭ್ರಮಕ್ಕೆ ಕಾರಣಳಾಗುತ್ತಿದ್ದಳು. ಬೀಸುವ ಕಲ್ಲಿನ ಮುಂದೆ ಕೂತಾಗಲೋ , ಮೊಸರು ಕಡೆಯ...

Bomb – Upakaara

ಬಾಂಬ್ ಉಪಕಾರ ( ಕಥೆಗಾರ:  ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ ) (Bomb – Upakaara English version is given below in the end) ಆಗ ನಾನು ಡೆಹ್ರಾಡೂನ್   ನಲ್ಲಿದ್ದೆ ಸರ್ಕಾರೀ   ನೌಕರಿ ಮಾಡುತ್ತಿದ್ದೆ . ಆಗ ನನಗೆ ಪದೇ ಪದೇ ಕಾರ್ಯನಿಮಿತ್ತ   ಪ್ರಯಾಣ ಮಾಡುವ ಸಂದರ್ಭ ಒದಗಿಬರುತ್ತಿದ್ದವು .  ನಾನೋ ಬ್ರಹ್ಮಚಾರಿ , ಪ್ರಯಾಣಕ್ಕೆ ಸನ್ನದ್ಧವಾಗುವುದೇನೂ ಕಷ್ಟವೆನಿಸುತ್ತಿರಲಿಲ್ಲ . ನನ್ನದೊಂದು ಸಣ್ಣ ಬ್ರೀಫ್ ಕೇಸ್ ಸದಾ ಸಿದ್ಧವಾಗಿರುತ್ತಿತ್ತು . ಅದೊಂದು ದಿನ ಬೆಳಗ್ಗೆ ನನ್ನ ಮೇಲಧಿಕಾರಿ ಕೂಡಲೇ ಮದ್ರಾಸಿಗೆ ಹೋಗು ಎಂದರು ಹೊರಟೆ . ಯಾವ ಟಿಕೇಟ್ ರಿಸರ್ವೇಶನ್ ಮಾಡಿಸಿರಲೂ ಇಲ್ಲ . ನನ್ನ ಬಳಿ ಇದ್ದ ಬ್ರೀಫ್ ಕೇಸ್ನಲ್ಲಿ ಆಫೀಸ್ನ ಕೆಲವು ಸಾಮಗ್ರಿಗಳನ್ನೂ ಕೊಂಡುಹೋಗಬೇಕಿತ್ತು . ಅವು ಇಂಪೋರ್ಟ್ ಮಾಡಿದ್ದ ಬೆಲೆಬಾಳುವ ಉಪಕರಣಗಳು ಆಗಿದ್ದವು . ಮತ್ತೊಂದು ಸ್ಲೀಪಿಂಗ್ ಬ್ಯಾಗ್ ಹಿಡಿದುಕೊಂಡಿದ್ದೆ . ಚಳಿಗಾಲದಲ್ಲಿ ಅದರ ಉಪಯೋಗ ಉತ್ತರಭಾರತದಲ್ಲಿ ಪ್ರಯಾಣ ಮಾಡಿದವರಿಗೆ ಗೊತ್ತು .   ಬಸ್ ಸ್ಟ್ಯಾಂಡ್ಗೆ ಬಂದರೆ ಅಲ್ಲೊಂದು ಶಟ್ಲ್ ಬಸ್ ದಿಲ್ಲಿಗೆ ಹೋಗಲು ಸಿದ್ಧವಾಗಿತ್ತು ಹತ್ತಿ ಕುಳಿತೆ .  ದಾರಿಯುದ್ದಕ್ಕೂ ಅಲ್ಲಲ್ಲಿ ನಿಲ್ಲಿಸುತ್ತಾ ಹೋಗುತ್ತಿತ್ತು ಆ ಬಸ್ .  ಮಧ್ಯಾಹ್ನದ ಹೊ...